ಓಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ.ಪ್ರದೀಪ್ಸಿಂಗ್, ಎಸ್.ಧರ್ಮಲಿಂಗಂ ಹಾಗೂ ಎನ್.ಓಂಪ್ರಕಾಶ್ರಾವ್ ನಿರ್ಮಿಸುತ್ತಿರುವ ‘ಡಕೋಟ ಫ಼್ಯಾಮಿಲಿ ಚಿತ್ರ ವಿಜಯದಶಮಿ ಶುಭದಿನ ಹಂಸಲೇಖ ಸ್ಟುಡಿಯೋದಲ್ಲಿ ಆರಂಭವಾಗಲಿದೆ. ಹಾಡುಗಳ ಧ್ವನಿಮುದ್ರಣ ಸಹ ಅಂದೇ ನಡೆಯಲಿದೆ.
ಡಿ.ಮನೋಹರ್ ಕಥೆ ಬರೆದಿರುವ ಈ ಚಿತ್ರಕ್ಕೆ ಎನ್.ಓಂಪ್ರಕಾಶ್ರಾವ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಚಿತ್ರಕ್ಕೆ ಹಾಡುಗಳನ್ನು ಬರೆದು ಸಂಗೀತವನ್ನು ನೀಡುತ್ತಿದ್ದಾರೆ. ವಾಲಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆ. ಎಸ್.ಮನೋಹರ್ ಸಂಕಲನ, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಕೆ.ಕೆ.ರಾಜು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ರಾಕ್ಲೈನ್ ವೆಂಕಟೇಶ್, ಓಂಪ್ರಕಾಶ್ರಾವ್, ಶ್ರೀನಿವಾಸಮೂರ್ತಿ, ತುಳಸಿ, ಸಾಧುಕೋಕಿಲಾ, ಬುಲೆಟ್ಪ್ರಕಾಶ್, ಶೋಭ್ರಾಜ್, ಮೈಕೋನಾಗರಾಜ್ ಮುಂತಾದವರ ತಾರಾಬಳಗವಿರುವ ಈ ಚಿತ್ರಕ್ಕೆ ನವಂಬರ್ ಎರಡರಿಂದ ಮೈಸೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.